ಅರಕಲಗೂಡಿನಲ್ಲಿ ಮೂವರಿಗೆ ವಕ್ಕರಿಸಿದ ಕಿಲ್ಲರ್ ಕೊರೊನಾ,ಹುಲಿಕಲ್ ಮತ್ತು ಮುದ್ದನಹಳ್ಳಿ ಸೀಲ್ ಡೌನ್.

ಅರಕಲಗೂಡು ತಾಲ್ಲೂಕಿನಲ್ಲಿ ಮುಂದುವರೆದ ಮಹಾ ಮಾರಿ ಕೊರೊನಾ ಅರ್ಭಟ

ಇಂದು ಕೊಡ ತಾಲ್ಲೂಕಿನ ಮೂವರಿಗೆ ವಕ್ಕರಿಸಿರುವ ಕಿಲ್ಲರ್ ಕೊರೊನಾ,



ಅರಕಲಗೂಡು  ತಾಲೂಕಿನಾದ್ಯಂತ  ನಿದಾನವಾಗಿ ತನ್ನ ಕಬಂಧಬಹುವನ್ನು ಚಾಚುತ್ತಿರುವ ಚೈನಾ ಹೆಮ್ಮಾರಿ ,

ತಾಲ್ಲೂಕಿನ ಹುಲಿಕಲ್ ಮೂಲದ, ಬೆಂಗಳೂರಿನಲ್ಲಿ ಬೇಕರಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಒರ್ವ ಯುವಕ, .ಶಿರಧನಹಳ್ಳಿ ಮೂಲದ ಕೆ.ಎಸ್‌, ಅರ್,ಟಿ,ಸಿ, ಚಾಲಕ ರೊರ್ವರು ಹಾಗೂ ಕೊರಟಿಕೆರೆಯ ಒರ್ವರು ಸೇರಿದಂತೆ ಮೂವರಲ್ಲಿ ಕೊರೊನಾ ಸೊಂಕು ಇರುವುದು ಇಂದು ಬಂದ ಪರೀಕ್ಷಾ ವರದಿಯಲ್ಲಿ.


ದೃಢಪಟ್ಟ ಹಿನ್ನೆಲೆಯಲ್ಲಿ  ತಾಲ್ಲೂಕು ವೈದ್ಯಾಧಿಕಾರಿಗಳಾದ ಸ್ವಾಮಿ ಗೌಡ, ಮತ್ತು ಸಿಬ್ಬಂದಿಗಳು ಪೋಲಿಸ್ ಸಿಬ್ಬಂದಿ, ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಇಂದು ಗ್ರಾಮಗಳಿಗೆ ತೆರಳಿ ರಾಸಾಯನಿಕ ಸಿಂಪಡಣೆ ಮಾಡಿ ಸೊಂಕಿತರು ಮತ್ತು ಅಕ್ಕ ಪಕ್ಕದ ಮನೆಗಳ ಜನಗಳು ಹಾಗೂ ಹೊರಗಿನವರು ಪ್ರವೇಶವನ್ನು ನಿಷೇಧಿಸಿ ಕಂಟೋನ್ಮೆಂಟ್ ಜೋನ್  ಮಾಡಲಾಗಿದೆ.


ವರದಿ: ರವಿಕುಮಾರ್ ದುಮ್ಮಿ ಅರಕಲಗೂಡು

No comments:

Post a Comment